ಪತ್ರಕರ್ತ ಕೆ.ಸದಾಶಿವಶೆಣೈ ನಿರ್ದೇಶನದ ‘ಪ್ರಾರ್ಥನೆ ಚಿತ್ರ ಇಂದು ಬಿಡುಗಡೆಯಾಯಿತು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಲ್ಲೂರುಪ್ರಸಾದ್ ಹಾಗೂ ಹಿರಿಯ ಸ್ವತಂತ್ರ ಹೋರಾಟಗಾರರಾದ ದೊರೆಸ್ವಾಮಿ ಅವರು ಕನ್ನಡ ಬಾವುಟ ಹಾರಿಸುವುದರ ಮೂಲಕ ಬೆಳಗಿನ ಪ್ರದರ್ಶನವನ್ನು ಮೇನಕಾ ಚಿತ್ರಮಂದಿರದಲ್ಲಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕ ಕೆ.ಸದಾಶಿವಶೆಣೈ ಹಾಗೂ ನಿರ್ಮಾಪಕರಾದ ಎನ್.ಹರೀಶ್, ಜೆ.ಸಿ.ಪುಷ್ಪಾ ಇದ್ದಾರೆ.